ಕರ್ನಾಟಕ ರಾಜ್ಯೋತ್ಸವ
ಕರ್ನಾಟಕ ರಾಜ್ಯೋತ್ಸವ
ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ
ಶಾಂತಿನಗರ ಬ್ಯಾಹಟ್ಟಿ
ಇಂದು ನಮ್ಮ ಶಾಲೆಯಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಿಸಲಾಯಿತು. ಈ ಕಾರ್ಯಕ್ರಮಕ್ಕೆ ಬ್ಯಾಹಟ್ಟಿ ಗ್ರಾಮ ಪಂಚಾಯಿತಿ ಸದಸ್ಯರಾದ ಶ್ರೀಯುತ ರಾಜೆಸಾಬ್ ನದಾಫ್ ಹಾಗೂ ಎಸ್ಡಿಎಂಸಿ ಅಧ್ಯಕ್ಷರಾದ ಶ್ರೀಯುತ ಪ್ರಕಾಶ್ ಕರಶೆಟ್ಟಿ ಹಾಗೂ ಸದಸ್ಯರಾದ ಸಂತೋಷ್ ತೆಲಿ ಮತ್ತು ಶರೀಫ್ ಸಾಬ್ ನೋಲ್ವಿಯವರು ಮತ್ತು ಮಾಜಿ ಎಸ್ಡಿಎಂಸಿ ಅಧ್ಯಕ್ಷರಾದ ಶ್ರೀಯುತ ಜಮಾದಾರ್ ಅವರು ಮತ್ತು ಊರಿನ ಹಿರಾಯರಾದ ಶ್ರೀಯುತ ರಾಮನಗೌಡ ಹುಯ್ಲಗೋಳವರು ಮತ್ತು ನಮ್ಮ ಶಾಲೆಯ ಪ್ರಧಾನ ಗುರುಗಳು ಮತ್ತು ಶಿಕ್ಷಕ ವೃಂದದವರು ಮತ್ತು ಅಡುಗೆ ಸಿಬ್ಬಂದಿ ಮತ್ತು ನಮ್ಮ ಶಾಲೆಯ ಮುದ್ದು ಮಕ್ಕಳು ಅಂಗನವಾಡಿಯ ಮುದ್ದು ಮಕ್ಕಳು ಮತ್ತು ಊರಿನ ಎಲ್ಲಾ ನಾಗರಿಕರು ಮತ್ತು ಯುವ ಮಿತ್ರರು ಎಲ್ಲರೂ ಸೇರಿ ಕರ್ನಾಟಕ ರಾಜ್ಯೋತ್ಸವ ದಿನಾಚರಣೆ ಆಚರಿಸಲಾಯಿತು.
ಧ್ವಜಾರೋಹಣ ಕಾರ್ಯಕ್ರಮವನ್ನು ಮುಗಿಸಿ ಊರಿನಲ್ಲಿ ಪ್ರಭಾತ್ ಪ್ರೇರಿ ಹೋಗಿ ಬಂದು ಮಕ್ಕಳಿಂದ ಕೆಲವು ಕನ್ನಡ ನಾಡಿನ ಘೋಷಣೆಗಳನ್ನು ಕೂಗಿಸಿ ಚಿಕ್ಕ ಕಾರ್ಯಕ್ರಮ ಹಮ್ಮಿಕೊಂಡು ಅಚ್ಚುಕಟ್ಟಾಗಿ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸಲಾಯಿತು
ಆ ಕಾರ್ಯಕ್ರಮದ ಕೆಲವು ಫೋಟೋಗಳು......
ಪ್ರಧಾನ ಗುರುಗಳು
ಶ್ರೀಯು G S ಹುಬ್ಬಳ್ಳಿ
ಸಹಶಿಕ್ಷಕರು
ಶ್ರೀಮತಿ ಮಂಜುಳಾ ಮುಕ್ರಿ
ಶ್ರೀ ಬಿ ಆಯ್ ಕೆಂಚನಗೌಡ್ರ




































